ಕನ್ನಡದ ಮನರಂಜನಾ ವಾಹಿನಿಗಳಲ್ಲಿ ಅಗ್ರಸ್ಥಾನದಲ್ಲಿರುವ ಜೀ ಕನ್ನಡ, ಕಳೆದ ೧೦ ವರ್ಷಗಳಿಂದಲೂ ತನ್ನ ವೀಕ್ಷಕರ ಅಭಿರುಚಿಯನ್ನು ಅರಿತು ಅವರನ್ನು ರಂಜಿಸುತ್ತ ಬಂದಿದೆ. ವಿವಿಧ ಶೈಲಿಯ ಕಾರ್ಯಕ್ರಮಗಳನ್ನು ನೀಡುತ್ತಾ ನೋಡುಗರ ಮನದಲ್ಲಿ ನೆಲೆನಿಂತಿದೆ. ಇತ್ತೀಚಿನ ದಿನಗಳಲ್ಲಿ ಬಂರುತ್ತಿರುವ ನಾಗಿಣಿ, ಗಂಗಾ, ಮಹಾದೇವಿಯಂಥ ವಿಭಿನ್ನ ಕಥಾಹಂಧರವುಳ್ಳ ಧಾರಾವಾಹಿಗಳು, ಡ್ರಾಮಾ ಜೂನಿಯರ್ಸ್, ಸರಿಗಮಪ ಲಿಟಲ ಚಾಂಪ್ಸ್, ವೀಕೆಂಡ್ ವಿತ್ ರಮೇಶ್ನಂಥ ಜನಪ್ರಿಯ ರಿಯಾಲಿಟಿ ಶೋಗಳ ಯಶಸ್ಸಿನ ನಂತರ ಇದೀಗ ಮತ್ತೊಂದು ಹೊಸ ಮಹಿಳಾಪ್ರಧಾನ ಕಥೆ ಹೊಂದಿದ ಧಾರಾವಾಹಿಯನ್ನು ಕನ್ನಡಿಗರಿಗೆ ನೀಡುವಲ್ಲಿ ಮುಂದಾಗಿದೆ. ಈಗಾಗಲೇ ಹಲವಾರು ಯಶಸ್ವೀ ಮಹಿಳಾಪ್ರಧಾನ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶೃತಿನಾಯ್ಡು ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಇನ್ನೊಂದು ಧಾರಾವಾಹಿ ಇದಾಗಿದೆ. ಮಹಾನದಿ ಎಂಬ ಹೆಸರಿನ ಈ ಸೀರಿಯಲ್ ಇದೇ ಜುಲೈ ೪ರಿಂದ ಸಂಜೆ ೭.೦೦ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಪದವಿಯ ಆಟಕೆ, ಪ್ರೀತಿಯೇ ಪಗಡೆ ಎಂಬ ಅಡಿಬರಹ ಹೊತ್ತು ಬರುತ್ತಿರುವ ಈ ಮಹಾನದಿಯಲ್ಲಿ ರಾಜಕೀಯ ಹಿನ್ನೆಲೆಯಲ್ಲಿ ಒಂದು ಸುಂದರ ಪ್ರೇಮಕಥಾಹಂದರವನ್ನು ಹೆಣೆಯಲಾಗಿದೆ. ನಾರಾಯಣ ಪಟ್ಟಣವೆಂಬ ಸಣ್ಣ ಊರಿನಲ್ಲಿರುವ ಪೋಸ್ಟ್ಮ್ಯಾನ್ನ ಇಬ್ಬರು ಸುಂದರ ಹೆಣ್ಣುಮಕ್ಕಳ ಮೇಲೆ ಇಡೀಕಥೆ ಸಾಗಲಿದೆ. ೨ನೇ ಮಗಳಾದ ಮಧುರ ಊರಿನ ಎಂ.ಎಲ.ಎ. ವಿಕ್ರಮ್ ಸಿಂಹನ ಜೊತೆ ತನ್ನ ಅಕ್ಕನಾದ ಮೇಘನಾಳನ್ನು ಮದುವೆ ಮಾಡಿಸಲು ಹೋಗುತ್ತಾಳೆ. ನಂತರ ಬದಲಾದ ಸಂದರ್ಭದಲ್ಲಿ ತಾನೇ ಅವನಿಂದ ಮೋಹಿತಳಾಗುತ್ತಾಳೆ. ಅವಳ ಇಡೀ ಕುಟುಂಬ ತಮಗೇ ಅರಿವಿಲ್ಲದಂತೆ ರಾಜಕೀಯ ಚದುರಂಗದಲ್ಲಿ ದಾಳಗಳಾಗುತ್ತಾರೆ.
ಈ ರಾಜಕೀಯದ ಚಕ್ರವ್ಯೂಹದಿಂದ ಮಧುರಾ ಹೇಗೆ ಪಾರಾಗುತ್ತಾಳೆ? ತನ್ನ ಅಕ್ಕನ ಸಂಸಾರವನ್ನು ಹೇಗೆ ರೂಪಿಸುತ್ತಾಳೆ ಎನ್ನುವುದೇ ಮಹಾನದಿ ಧಾರಾವಾಹಿಯ ಸಾರಾಂಶ. ರಾಜಕೀಯದ ಮಧ್ಯೆಯೇ ಉಳಿದು ಅಕ್ಕ-ತಂಗಿ ಮಾನವೀಯತೆಯನ್ನು ಕೂಡ ಮೆರೆಯುತ್ತಾರೆ. ಸಮಾಜದಲ್ಲಿ ನಡೆಯುತ್ತಿರುವ ಹಲವಾರು ಅನ್ಯಾಯಗಳ ವಿರುದ್ಧ ಈ ಸಹೋದರಿಯರು ದನಿಯೆತ್ತುತ್ತಾರೆ. ದೊಡ್ಡ ಬಿರುಗಾಳಿಯ ಎದುರು ಒಬ್ಬ ಹೆಣ್ಣುಮಗಳು ಹೇಗೆ ದಿಟ್ಟತನದಿಂದ ಹೋರಾಟ ನಡೆಸಿ ಗಟ್ಟಿಯಾಗಿ ನಿಲ್ಲುತ್ತಾಳೆ ಎನ್ನುವುದನ್ನು ಈ ಧಾರಾವಾಹಿಯಲ್ಲಿ ಪರಿಣಾಮಕಾರಿಯಾಗಿ ನಿರೂಪಿಸಲಾಗಿದೆ.
ಈ ಹಿಂದೆ ಶ್ರೀರಸ್ತು ಶುಭಮಸ್ತು, ಚಿ.ಸೌ. ಸಾವಿತ್ರಿ, ಮಹಾದೇವಿ, ಪುನರ್ವಿವಾಹದಂಥ ಯಶಸ್ವಿ ಧಾರಾವಾಹಿಗಳನ್ನು
ನಿರ್ಮಿಸಿ, ನಿರ್ದೇಶಿಸಿರುವ ಶೃತಿ ನಾಯ್ಡು ಈ ಧಾರಾವಾಹಿಯ ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿzರೆ.
ಚಿತ್ರನಟ ನಾಗಕಿರಣ, ಕೀರ್ತಿರಾಜ, ಭಾವನಾ ಬೆಳಗೆರೆ ಸೇರಿದಂತೆ ಹಲವಾರು ಸೆಲಬ್ರಟಿಗಳ ಜೊತೆ ಮತ್ತಷ್ಟು ಹಿರಿಯ, ಕಿರಿಯ ಕಲಾವಿದರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.